ಬೆಂಗಳೂರಿನಲ್ಲಿ ಭಾರಿ ಮಳೆ : ಧರೆಗುಳಿದ ಮರಗಳು, ಟ್ರಾಫಿಕ್ ಜಾಮ್ ಸಮಸ್ಯೆ

ಬೆಂಗಳೂರಿನಲ್ಲಿ ಭಾರಿ ಮಳೆ : ಧರೆಗುಳಿದ ಮರಗಳು, ಟ್ರಾಫಿಕ್ ಜಾಮ್ ಸಮಸ್ಯೆ
Spread the love

ರಾಜ್ಯದಲ್ಲಿ ಹಲವು ಕಡೆ ಮಳೆಯಾಗಿದೆ. ಬೆಂಗಳೂರು ಚಿಕ್ಕಮಗಳೂರು ಸೇರಿ ಅನೇಕ ಕಡೆ ಮೇ 6 ಮತ್ತು 7ನೇ ತಾರೀಖು ಮಳೆ ಬಂದಿದ್ದು ಅಲ್ಲಲ್ಲಿ ಮರಗಳು ಧರೆಗೆ ಉರುಳಿ ಬಿದ್ದಿವೆ, ಕೆಲವು ಕಡೆ ರಸ್ತೆ-ಮಾರ್ಗಗಳೂ ಜಲಾವೃತಗೊಂಡಿದ್ವು ಟ್ರಾಫಿಕ್‌ ಸಮಸ್ಯೆ ಕೂಡ ಕಂಡುಬಂದಿದೆ. ಅಷ್ಟೇ ಅಲ್ಲ ಇನ್ನೂ 7 ದಿನ ರಾಜ್ಯದ ಹಲವು ಕಡೆ ಮಳೆಯಾಗಲಿದೆ ಅಂತ ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇ 07, 2024 ರಿಂದ ಮೇ 14 ರವರೆಗೆ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಮತ್ತು ಮೇ 10 ರಿಂದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ಕೊಟ್ಟಿದೆ. ಅತ್ತ ಮುಂದಿನ 24 ಗಂಟೆಗಳ ಕಾಲ, ಕರ್ನಾಟಕ ಬಹುತೇಕ ಕಡೆಗಳಿಗೆ ಭಾರತೀಯ ಹಮಾಮಾನ ಇಲಾಖೆ ಎಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

 

Comments

No comments yet. Why don’t you start the discussion?

Leave a Reply

Your email address will not be published. Required fields are marked *